ಚಿತ್ರದುರ್ಗ ಮಾ. ,7: ತಾಲ್ಲೂಕಿನಾದ್ಯಂತ ಯಾವುದೇ ಲೈಸನ್ಸ್ ಇಲ್ಲದೆ ನಡೆಯುತ್ತಿರುವ ಕ್ವಾರಿ ಮತ್ತು ಕ್ರಷರ್ ಗಳನ್ನು ಕೂಡಲೇ ಸ್ಥಗಿತಗೊಳ್ಳಿಸಲು ಕ್ರಮ ವಹಿಸಬೇಕು ಇಲ್ಲದಿದ್ದರೆ ಮುಂದೆ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೇರ ಹೊಣೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿಕಾರಿದರು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಕ್ವಾರೆ ಮತ್ತು ಕ್ರಷರ್ ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಕಾನೂನು ಪರಿಪಾಲನೆ ಮಾಡಬೇಕು. ಕೆಲಸ ಮಾಡುವ ಕಾರ್ಮಿಕರ ಜೀವಕ್ಕೆ ಯಾವುದೇ ಹಾನಿಯಾಗದಂತೆ ಕ್ರಷರ್ ಮತ್ತು ಕ್ವಾರೆ ಮಾಲೀಕರು ಎಚ್ಚವಹಿಸಬೇಕಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ವಾರಿ ಮತ್ತು ಕ್ರಷರ್ ಕಲ್ಲು ಸಿಡಿಸುವಾಗ ಯಾವುದೇ ರೀತಿಯ ಮುಂಜಾಗ್ರತೆಯನ್ನು ತೆಗೆದುಕೊಳ್ಳದೆ ಆನಾಹುತ ಸಂಭವಿಸಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿಯೂ ಸಹಾ ಹಲವಾರು ಕ್ವಾರಿ ಮತ್ತು ಕ್ಲಷರ್ ಗಳಿದ್ದು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆಯನ್ನು ಒದಗಿಸಬೇಕಿದೆ ಇದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುವುದರ ಮೂಲಕ ಪರಿಶೀಲನೆಯನ್ನು ಮಾಡಬೇಕಿದೆ. ಯಾರದೂ ತಪ್ಪಿಗೆ ಮತ್ತೆ ಯಾರೋ ಅಮಾಯಕರು ಸಾವನ್ನಪ್ಪಿತ್ತಿದ್ದಾರೆ. ಈ ರೀತಿ ಆಗಬಾರದು ಸುರಕ್ಷತಾ ಕ್ರಮವನ್ನು ತೆಗೆದುಕೊಂಡು ಕೆಲಸವನ್ನು ಮಾಡುವಂತೆ ತಿಳಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಕೆಲವು ಕ್ವಾರಿಗಳು ಪರವಾನಿಗೆಯನ್ನು ಪಡೆದು ಕೆಲಸ ಮಾಡುತ್ತಿದ್ದರೆ ಮತ್ತೆ ಕೆಲವು ಪರವಾನಿಗೆ ಇಲ್ಲದೆ ಕೆಲಸವನ್ನು ಮಾಡುತ್ತಿದೆ ಇದರ ಬಗ್ಗೆ ಸಹ ಸಂಬಂಧಿಸಿದ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಮನ ನೀಡಬೇಕಿದೆ. ಇಂತಹ ಕ್ವಾರಿ ಮತ್ತು ಕ್ಲಷರ್ಗಳನ್ನು ಮಟ್ಟ ಹಾಕಬೇಕಿದೆ. ನಗರದ ಹೂರ ವಲಯದ ಸೀಬಾರ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿನ ಗುಡ್ಡಗಳನ್ನು ಬ್ಲಾಸ್ಟ್ ಮಾಡುವುದರಿಂದ ರಾತ್ರಿಯ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರುಗಳು ನನಗೆ ಬಂದಿವೆ. ಕ್ವಾರೆ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿನ ಮನೆಗಳು ಬಿರುಕು ಬಿಟ್ಟಿದೆ. ಇದರ ಬಗ್ಗೆ ಜನತೆಯೂ ಸಹ ದೂರಿದ್ದಾರೆ. ಇದರಿಂದ ಇದರ ಬಗ್ಗೆಯೂ ಸಹ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
+ There are no comments
Add yours