ಹಿರಿಯೂರು:
ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ
ನಗರದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪುರುಷರ ಸಮಾನವಾಗಿ ಮಹಿಳೆಯರು ಸಹ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲರು ಮಹಿಳೆಯರನ್ನು ಪುರುಷರು ಸಾಮಾನವಾಗಿ ಕಾಣಬೇಕು. ಎಂದರು ನಮ್ಮ ಸರ್ಕಾರ ಅಂಗನವಾಡಿ ನೌಕರರಿಗೆ 2022ನೇ ಸಾಲಿನಲ್ಲಿ 1500 ಗೌರವಧನ ಹೆಚ್ಚು ಮಾಡಿದೆ ಎಂದರು.ತಾಲ್ಲೂಕಿನಲ್ಲಿ ನನ್ನ ಅವಧಿಯಲ್ಲಿ ಸುಮಾರು 32
ಅಂಗನವಾಡಿಗಳಿಗೆ ತಲಾ ರೂ.
16.00 ಲಕ್ಷದಂತೆ ಸುಮಾರು ರೂ. 5.12 ಕೋಟಿ ಮಂಜೂರು ಮಾಡಲಾಗಿದೆ. ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಅಪೂರ್ವ ಚಿರಂಜೀವಿ, ಎಂ.ಡಿ ಸಣ್ಣಪ್ಪ, ಮಂಜುಳಾ, ಬಿಜೆಪಿ ಪ್ರಧಾನಕಾರ್ಯದರ್ಶಿ ಕೇಶವಮೂರ್ತಿ, ಸಿಡಿಪಿಒ ಮಂಜುನಾಥ್, ನಿವೃತ್ತ ಸಿಡಿಪಿಒ ತಿಪ್ಪಯ್ಯ, ಮಹಿಳಾ ಒಕ್ಕೂಟದ ಸದಸ್ಯೆ ಜೆ ಜಿ ಹಳ್ಳಿ, ಲಲಿತಮ್ಮ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours