ಬಗರ್ಹುಕುಂ ಹಕ್ಕುಪತ್ರ ವಿತರಣೆಗೆ ತಿಂಗಳ ಗಡುವು: ಕಳೆದ 20-25 ವರ್ಷದಿಂದ ಜನರಿಗೆ ಜಮೀನು ಮಂಜೂರಾತಿ ಮಾಡಲಾಗಿಲ್ಲ. ಹಾಗಾಗಿ ಬಗರ್ಹುಕುಂನಡಿ ಹಕ್ಕುಪತ್ರ ನೀಡಲು ಪಟ್ಟಿ ಸಿದ್ಧಪಡಿಸಲಾಗಿದ್ದು, ಪಟ್ಟಿಯ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸಲಾಗಿದೆ. ಈ ಬಗ್ಗೆ ಕಂದಾಯ ಸಚಿವರು ಸ್ಪಷ್ಪಪಡಿಸಿದ್ದು, ಬಗರ್ಹುಕುಂ ಸಮಿತಿಯಲ್ಲಿ ಭೂ ಮಂಜೂರಾತಿ ನೀಡಿದ ಹಕ್ಕುಪತ್ರಗಳನ್ನು ತಹಶೀಲ್ದಾರ್ ಹಂತದಲ್ಲಿ ಅನುಮೋದನೆ ಮಾಡಲು ಅವಕಾಶವಿದ್ದು, ಸರ್ಕಾರದ ಆದೇಶವು ಸ್ಪಷ್ಟವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಈಗಾಗಲೇ ಸಿದ್ಧವಾಗಿರುವ ಅಕ್ರಮ ಸಕ್ರಮ ಬಗರ್ಹುಕುಂ ಹಕ್ಕುಪತ್ರಗಳನ್ನು ಫೆಬ್ರವರಿ ಮೊದಲ ವಾರದಲ್ಲಿ ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಸೂಚಿಸಿದರು.
[t4b-ticker]
+ There are no comments
Add yours