ಚಿತ್ರದುರ್ಗ:ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ, ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ದೃಷ್ಠಿಯಿಂದ ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆ. 2023ರ ಚುನಾವಣೆ ದೃಷ್ಠಿಯಿಂದ ಕೆಲ ಬದಲಾವಣೆ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಪಕ್ಷ ಬಲಿಪಡಿಸಲು ನನಗೆ ಮಂತ್ರಿ ಸ್ಥಾನ ನೀಡುವ ಭರವಸೆ ಮತ್ತು ವಿಶ್ವಾಸವಿದೆ.
ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ.ಬಿಎಸ್ ವೈ ಸಹ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ, ಕಟೀಲ್, ಪಕ್ಷದ ಸಂಘಟನೆಗಳಿಗೂ ನನ್ನ ಮೇಲೆ ಒಲವಿದೆ.ಈ ಸಲ ಮಂತ್ರಿ ಸ್ಥಾನ ಸಿಗಬಹುದೆಂಬ ವಿಶ್ವಾಸವಿದೆ.
ಸಿಎಂ ಸ್ಥಾನದಿಂದ ಬೊಮ್ಮಾಯಿ ಬದಲಾವಣೆ ಊಹಾಪೋಹ.ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ.ಬೊಮ್ಮಾಯಿ ಬದಲಾವಣೆ ಅಜಂಡಾದಲ್ಲಿ ಇಲ್ಲ.ಕೇಂದ್ರದ ನಾಯಕರು ಸಿಎಂ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
[t4b-ticker]
+ There are no comments
Add yours