ಚಳ್ಳಕೆರೆ: ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದಂತೆ ತಾಲ್ಲೂಕಿನಲ್ಲಿ ರಾಜಕೀಯದ ಆಟಗಳು ಸದ್ದಿಲ್ಲದೆ ಗರಿಗದರಿದರೆ ಮತ್ತೊಂದು ಕಡೆ ಇತರೆ ಪಕ್ಷಗಳ ಮುಖಂಡರು ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತಾಲ್ಲೂಕಿನ ಟಿ.ಎನ್. ಕೋಟೆ ಗ್ರಾಪಂ ವ್ಯಾಪ್ತಿಯ ತೊರೆಬೀರನಹಳ್ಳಿ ಗ್ರಾಮದ ಇತರೆ ಪಕ್ಷಗಳ ಮುಖಂಡರು ಶಾಸಕರು ಮಾಡಿದ ಅಭಿವೃದ್ದಿ ಕೆಲಸಗಳಿಗೆ ಮನಸೋತು, ಶಾಸಕರ ಜನಪರ ಆಡಳಿತ, ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿರುವುದಕ್ಕೆ ಶಾಸಕ ಟಿ. ರಘುಮೂರ್ತಿ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ತೊರೆಬೀರನಹಳ್ಳಿ ಗ್ರಾಮದ ರಮೇಶಣ್ಣ, ಸೀತಾರಾಮಪ್ಪ, ಹನುಮಂತರಾಯ, ಚಂದ್ರಣ್ಣ, ಜಯಣ್ಣ, ಹೆಂಜಾರಪ್ಪ, ಪ್ರಸನ್ನ, ಗೋವಿಂದರಾಜು, ರಮೇಶ್, ಗೌಡಪ್ಪ, ಕರಿಯಣ್ಣ, ರಘುನಾಥ್, ಜಲ್ದಿ ಗೌಡ, ಕುಮಾರ್, ವೀರೇಂದ್ರ ಅವರನ್ನು ಶಾಸಕ ಟಿ. ರಘುಮೂರ್ತಿ ಅವರು ಪುಷ್ಪಹಾರ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
[t4b-ticker]
+ There are no comments
Add yours