ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.21: ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದಲ್ಲಿ ಈಚೆಗೆ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನಡೆಯಿತು.
ಹಸಿರು ತೋರಣ, ಬಣ್ಣದಬಟ್ಟೆ, ಹೂ ಮಾಲೆಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಕಳಸ ಪೂಜೆ, ಈಡುಗಾಯಿ, ಬಲಿಅನ್ನ, ಕುಂಬಳ ಕಾಯಿ ಒಡೆದು, ಮಹಾಮಂಗಳಾರತಿ ನಂತರ ಇತರ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು.
ಜಾತ್ರೋತ್ಸವದ ಅಂಗವಾಗಿ ಲಕ್ಷ್ಮೀದೇವಸ್ಥಾನದಲ್ಲಿ ಮಿತ್ನ ಅಳೆಯುವುದು, ತಂಬಿಟ್ಟಿನ ಆರತಿ ಬೆಳಗುವುದು ಅನ್ನ ದಾಸೋಹ ಕಾರ್ಯಕ್ರಮ ನಡೆಯಿತು.
[t4b-ticker]
+ There are no comments
Add yours