ವೇಣೂರು: ವೇಣೂರು ಮಹಾವೀರ ನಗರದ ಶಿವಪ್ರಸಾದ ವೆಲ್ಡಿಂಗ್ ವರ್ಕ್ಸ್ ಇದರ ಮಾಲಕರಾದ ಶ್ರೀ ಸೀತಾರಾಮ ಕುಲಾಲ್ (44) ಇವರು ದಿನಾಂಕ 6-9-2026ರಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಯುವಕ ಮಂಡಲ (ರಿ.) ವೇಣೂರು, ಯುವಸೇವಾ ಸಂಗಮ (ರಿ.) ವೇಣೂರು, ಭಾ.ಜ.ಪ. ಹಾಗೂ ಕುಲಾಲ ಸಂಘದಲ್ಲಿ ಸಕ್ರೀಯ ಸದಸ್ಯರಾಗಿ ಸೇವಾ ಚಟುವಟಿಕೆಗಳಲ್ಲಿ ಹಾಗೂ ವೇಣೂರಿನ ಶ್ರೀ ಗಣೇಶೋತ್ಸವಕ್ಕೆ ಹೊಸ ರೂಪದ ಹೊಸ ಟ್ಯಾಬ್ಲೋಗಳನ್ನು ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಇವರ ವೆಲ್ಡಿಂಗ್ ವೃತ್ತಿಯಲ್ಲಿ ಹಲವಾರು ಮಂದಿ ತರಬೇತಿಯನ್ನು ಪಡೆದು ಈಗ ಸ್ವಾವಲಂಭಿಯಾಗಿ ಹೊಸ ವೆಲ್ಡಿಂಗ್ ಶಾಪ್ ತೆರೆದು, ಇವರು ಶಿಷ್ಯರಿಗೆ ಬೆಳಕಾಗಿದ್ದಾರೆ.
ಇವರು ಪತ್ನಿ ಸಮಿತಾ, ಮಕ್ಕಳಾದ ಕು| ತಸ್ವಿ, ಪುತ್ರ ತುಷಾರ್ ಹಾಗೂ ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.