ವೇಣೂರು: ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವಾರು ವರ್ಷಗಳಿಂದ ಜಾತಕಪಕ್ಷಿಗಳಂತೆ ಕಾದುಕುಳಿತ್ತಿದ್ದ ಗ್ರಾಮಸ್ಥರಿಗೆ ವೇಣೂರು ಗ್ರಾ.ಪಂ.ನಿಂದ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ.
ವೇಣೂರು ಗ್ರಾ.ಪಂ.ನ ಬಜಿರೆ ಗ್ರಾಮದಲ್ಲಿ ಸುಮಾರು ೪೦ ಕುಟುಂಬಗಳಿಗೆ ನಿವೇಶನ ಕಾಯ್ದಿರಿಸಲಾಗಿತ್ತು. ಆದರೆ ಕಾನೂನು ತೊಡಕಿನಿಂದ ಫಲಾನುಭವಿಗಳ ಗುರುತಿಸುವಿಕೆ ಮತ್ತು ಹಂಚಿಕೆ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ವೇಣೂರು ಗ್ರಾಮ ಪಂಚಾಯತ್ನ ಆಡಳಿತ ಮಂಡಳಿ ವಿಶೇಷ ಗ್ರಾಮಸಭೆ ಕರೆದು ಫಲಾನುಭವಿಗಳಿಗೆ ಹಂಚುವ ಬಗ್ಗೆ ದಿಟ್ಟಕ್ರಮ ಕೈಗೊಂಡಿದೆ. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯತು ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಪಂಚಾಯತು ಸದಸ್ಯರು, ಕಾರ್ಯದರ್ಶಿ ಕಾರ್ಯದರ್ಶಿ ವನಜಾ ಹಾಗೂ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಯನ್ನು ನಿರ್ವಹಿಸಿದರು.





