ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಪದವಿಪೂರ್ವ ಕಾಲೇಜು, ವಿದ್ಯಾಗಿರಿ ಇಲ್ಲಿಯ ಕುವೆಂಪು ಸಭಾಂಗಣದಲ್ಲಿ ಜೂ. 26ರಂದು ಬೆಳಿಗ್ಗೆ 10-30ಕ್ಕೆ ಸೌಮ್ಯತಿಲಕ್ ಶೆಟ್ಟಿ ಇವರ ಮಸಿಯ ಮಾತು ಕವನ ಸಂಕಲನ ಬಿಡುಗಡೆಗೊಳ್ಳಲಿದೆ.
ಕೃತಿ ಲೋಕಾರ್ಪಣೆ ಮತ್ತು ಅಧ್ಯಕ್ಷತೆಯನ್ನು ಡಾ| ಎಂ. ಮೋಹನ್ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಡಾ| ಬಿ. ಪಿ. ಸಂಪತ್ ಕುಮಾರ್ವಿ ಶ್ರಾಂತ ಕುಲಸಚಿವರು ಹಾಗೂ ಆಡಳಿತ ನಿರ್ದೇಶಕರು ಎಕ್ಸಲೆಂಟ್ ಮೂಡುಬಿದಿರೆ ಇವರು ಭಾಗವಹಿಸಲಿದ್ದಾರೆ.
ವೇಣುಗೋಪಾಲ ಶೆಟ್ಟಿ ಕೆ. ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಇವರು ಕೃತಿ ಪರಿಚಯ ಮಾಡಲಿದ್ದು, ಶುಭಾಶಂಸನೆ ಶ್ರೀಮತಿ ಆಶಾ ಅಡೂರ್
ಹವ್ಯಾಸಿ ಬರಹಗಾರ್ತಿ ಉಜಿರೆ ಇವರು ನೆರವೇರಿಸಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ವಿಜಯ ಕುಮಾರ್ ಜೈನ್ ಮ್ಯಾನೆಜಿಂಗ್ ಟ್ರಸ್ಟಿ, ಆಮಂತ್ರಣ ಸೇವಾ ಪ್ರತಿಷ್ಠಾನ (ರಿ.) ಅಳದಂಗಡಿ ಮುಂತಾದವರು ಭಾಗವಹಿಸಲಿದ್ದಾರೆ.
ವಿದ್ಯಾಗಿರಿ ಆಳ್ವಾಸ್ ಪಿಯು ಕಾಲೇಜಿನ ಕನ್ನಡ ವಿಭಾಗದ ಡಾ| ಸುಧಾರಾಣಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಇದು ಸೌಮ್ಯ ತಿಲಕ್ ಶೆಟ್ಟಿ ಇವರ ಮೊದಲ ಕೃತಿ ಆಗಿದ್ದು, ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ಸೌಮ್ಯತಿಲಕ್ ಶೆಟ್ಟಿ ಮತ್ತು ತಿಲಕ್ ಶೆಟ್ಟಿ
ವಿನಂತಿ ಮಾಡಿದ್ದಾರೆ.



