ಬೆಳ್ತಂಗಡಿ: ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಲಿಬಾಲ್ ಕ್ರೀಡಾಪಟು ಮೊಗ್ರು ಗ್ರಾಮ ದಂಡುಗ ಕು. ರಕ್ಷಿತಾ ಜೆ.ಎಸ್ ಅವಳಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಆಯೋಜಿಸಿದ ಜೇಸಿ ಉತ್ಸವ ೨೦೨೫ ಕಾರ್ಯಕ್ರಮದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ದಿ. ಜನಾರ್ದನ ಗೌಡ ಮತ್ತು ಶೀಲಾವತಿ ದಂಪತಿಯ ಸುಪುತ್ರಿಯಾಗಿರುತ್ತಾಳೆ.






