ಇದೇ ಮೊದಲ ಬಾರಿಗೆ ನಾಳೆ (ಸೆ.18) ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಮಂಗಳೂರಿನ ಐತಿಹಾಸಿಕ ಸಂಪುಟ ಸಭೆಗೂ ಮುನ್ನ ಡಿನ್ನರ್ ಮೀಟಿಂಗ್ ನಡೆಯಲಿದೆ. ಇಂದು (ಸೆ.17) ರಾತ್ರಿಯೇಕಡಲ ಕಿನಾರೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಆಯೋಜಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಸಂಸದರಿಗೆ ಈ ಡಿನ್ನರ್ ಸಭೆಗೆ ಆಹ್ವಾನ ನೀಡಿದ್ದಾರೆ.


ಸಚಿವ ಸಂಪುಟ ಸಭೆ ಸಿದ್ದತೆ ಪರಿಶೀಲನೆ ವೇಳೆ ಖಾದರ್ ಗರಂ
ನಾಳೆ (ಸೆ.18) ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಂಪುಟ ಸಭೆಯ ಅಂತಿಮ ಹಂತದ ಸಿದ್ಧತೆಯನ್ನು ಸಚಿವ ಯುಟಿ ಖಾದರ್ ಪರಿಶೀಲಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಂತಿಮ ಸಿದ್ಧತೆಯನ್ನು ಸಚಿವ ಯುಟಿ ಖಾದರ್ ಪರಿಶೀಲಿಸಿದರು. ಆದ್ರೆ, ಈ ವೇಳೆ ಅಧಿಕಾರಿಗಳಿಗೆ ಹ್ಯಾಂಡ್ ರೆಸ್ಟ್ ಇಲ್ಲದ ಚೇರ್ ಹಾಕಿರುವುದಕ್ಕೆ ಸಚಿವರು ಗರಂ ಆಗಿದ್ದಾರೆ. ಎಷ್ಟೋತ್ತು ಅಂತಾ ಹ್ಯಾಂಡ್ ರೆಸ್ಟ್ ಇಲ್ಲದ ಚೇರ್ ನಲ್ಲಿ ಕುಳಿತುಕೊಳ್ಳಲು ಸಾದ್ಯ? ಮೀಟಿಂಗ್ ಹಾಲ್ ಅರೇಂಜ್ ಮಾಡುವವರ ವಿರುದ್ಧ ಗರಂ ಆಗಿದ್ದು, ಕೂಡಲೇ ಬೇರೆ ಚೇರ್ ಅರೇಂಜ್ ಮಾಡಿ ಎಂದಯ ತಾಕೀತು ಮಾಡಿದ್ದಾರೆ.ಇದಕ್ಕೆ ವೆಂಡರ್ ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ಇದನ್ನೆ ಹಾಕುತ್ತೇವೆ. ಈಗ ಬೆಂಗಳೂರಿಂದ ತರಿಸಲು ಆಗಲ್ಲ ಎಂದಿದ್ದಾರೆ. ಇದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡ ಖಾದರ್, ಆಗಲ್ಲ ಅನ್ನೊದನ್ನ ಬಿಟ್ಟು, ಹೇಳಿದಷ್ಟು ಮಾಡಿ ಎಂದು ತರಾಟೆ ತೆಗೆದುಕೊಂಡರು. ಹೀಗಾಗಿ ಅಧಿಕಾರಿಗಳ ಚೇರ್ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.



