ಎ. 5ರಂದು ನೂತನ ಶಿಲಾಮಯ ಶ್ರೀ ನಾಗದೇವರ 19 ಬಂಬಿಗಳ ಜಲಾಧಿವಾಸ, ಪಡ್ಡಂದಡ್ಕ ಪೇಟೆಯಿಂದ ಭವ್ಯ ಮೆರವಣಿಗೆ
ವೇಣೂರು: ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಸಾನಿಧ್ಯಗಳ ಪುನರ್ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಎ. 5ರಂದು ನೂತನ ಶಿಲಾಮಯ ಶ್ರೀ ನಾಗದೇವರ 19 ಬಿಂಬಗಳನ್ನು ಜಲಾಧಿವಾಸ ಮಾಡುವ ಕಾರ್ಯಕ್ರಮವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಬಹುಪ್ರಾಚೀನವಾದ ಶ್ರೀ ನಾಗಬ್ರಹ್ಮ ದೇವರ ಹಾಗೂ ಪರಿವಾರ ಸಾನಿಧ್ಯಗಳ ಆರೂಢವು ಜೀರ್ಣೋದ್ಧಾರಗೊಂಡು ಮೇ 24ರಂದು ಪ್ರತಿಷ್ಠಾಪನೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಇದೀಗ ಶ್ರೀ ನಾಗದೇವರ ಬಿಂಬಗಳನ್ನು ಎ. 5ರಂದು ಜಲಾಧಿವಾಸ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 9-00 ಗಂಟೆಯಿಂದ ಪಡ್ಡಂದಡ್ಕ ಪೇಟೆಯಿಂದ ಭವ್ಯಮೆರವಣಿಗೆ ಮೂಲಕ ಕುಣಿತ ಭಜನೆ ತಂಡಗಳೊಂದಿಗೆ ಮಂಜನಬೆಟ್ಟು ಸಾನಿಧ್ಯಕ್ಕೆ ಆಹ್ವಾನಿಸಿ, 11-00 ಗಂಟೆಗೆ ಬಿಂಬಗಳ ಜಲಾಧಿವಾಸ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಜಿನರಾಜ್ ಜೈನ್ ಪದ್ಮಾಂಬ ತಿಳಿಸಿದ್ದಾರೆ. ಆಗಮಿಸುವ ಭಕ್ತರಿಗೆ ಅತಿಥಿ ಸತ್ಕಾರದ ವ್ಯವಸ್ಥೆ ಇದೆ.





