ಮಂಗಳೂರು: ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಶ್ರೀನಿವಾಸನ್ ವೇಲು ಅವರು ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಳಿಕ ಪಣೋಲಿಬೈಲು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದರು. ಬಳಿಕ ಭಂಡಾರ ಮನೆಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಮೇಶ್ ಮತ್ತು ಕುಟುಂಬದದವರು ಅಭಿನಂದಿಸಿದರು.

ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಲ. ಅನಿಲ್ ದಾಸ್ ಅವರ ನೇತೃತ್ವದಲ್ಲಿ ಯುವ ವೇದಿಕೆ ಮತ್ತು ಕುಲಾಲ ಸಂಘ ಕೊಲ್ಯ ವತಿಯಿಂದ ಡಾ. ಶ್ರೀನಿವಾಸನ್ ಅವರನ್ನು ಅಭಿನಂದಿಸಿದರು. ಬಂಟ್ವಾಳ ಕುಲಾಲ ಸಂಘ ವತಿಯಿಂದ ಅಧ್ಯಕ್ಷ ರಮೇಶ್ ಸಾಲಿಯಾನ್ ಸಂಚಯಗಿರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ ಪಂಜಿಕಲ್ಲು, ಸಿಂಡಿಕೇಟ್ ಸದಸ್ಯರು ಸುರೇಶ್ ನಾವೂರ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಲಾಲ ಸಮುದಾಯದ ಮುಖಂಡರುಗಳಾದ ಡಾ. ಅಣ್ಣಯ್ಯ ಕುಲಾಲ್, ಸುಕುಮಾರ್ ಬಂಟ್ವಾಳ, ಚಂದ್ರಶೇಖರ್ ಮೂಲ್ಯ, ಯಾದವ ಅಗ್ರಬೈಲು, ದಯಾನಂದ ಅಡ್ಯಾರ್, ಮಚ್ಚೆಂದ್ರನಾಥ್ ಸಾಲಿಯಾನ್, ಸೋಮನಾಥ್, ಸೇಸಪ್ಪ ಮಾಸ್ಟರ್, ಭಾರತಿ ಟೀಚರ್ , ಸದಾಶಿವ ಬಂಗೇರ, ಸುಮಿತ್ ಸಾಲಿಯಾನ್, ಜಯಂತ್ ಉಚ್ಚಿಲ್, ರಂಜಿತ್ ಉಚ್ಚಿಲ್, ಪಣೋಲಿ ಬೈಲು ಭಂಡಾರ ಮನೆ ನವೀನ್ ಕುಲಾಲ್, ರಮೇಶ್ ಕುಲಾಲ್, ಶಿವಾನಂದ್, ದಯಾನಂದ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಡಾ. ಶ್ರೀನಿವಾಸನ್ ವೇಲು ಪರಿಚಯ
ಮೂಲತಃ ಬೆಂಗಳೂರಿನ ಕೊರಮಂಗಲದವರಾದ ಡಾ. ಶ್ರೀನಿವಾಸನ್ ವೇಲು ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಬೆಂಗಳೂರಿನಲ್ಲಿ ಶ್ರೀನಿವಾಸನ್ ಹೆಲ್ತ್ ಕೇರ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ತಥಾಗತ ಹೃದಯ ಆಸ್ಪತ್ರೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕುಂಭ ವೈದ್ಯರ ಕೂಟ, ಅಖಿಲ ಭಾರತ ಕುಂಬಾರರ ಮಹಾಸಭಾ, ಕರಾವಳಿ ಕುಂಬಾರರ ಯುವ ವೇದಿಕೆ ಸಂಘಟಿಸಿ ಕುಂಬಾರ ಸಮುದಾಯದ ಏಳಿಗೆಗಾಗಿ ದುಡಿದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ ಡಾಕ್ಟರ್ ಸೆಲ್ ಸಹಯೋಗದಲ್ಲಿ ಉಚಿತ ಆನ್ಲೈನ್ ಸಲಹೆ, ಸಹಾಯವಾಣಿ ಪ್ರಾರಂಭಿಸಿದರು. ಉಚಿತ ಔಷಧಿ ವಿತರಣೆ, ರಾಜ್ಯಾದ್ಯಂತ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.





