ಚಿತ್ರದುರ್ಗ: ಮಹಿಳೆಯರು ಹಿಂಜರಿಯುವ ಕಾಲ ಇದಲ್ಲ. ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಸಾಧನೆಗೆ ಸಕಾಲವಾಗಿದೆ.
ಐತಿಹಾಸಿಕ ಚಿತ್ರದುರ್ಗದ ಓಬವ್ವನ ನಾಡಿನಲ್ಲಿ ಬಹುತೇಕ ಉನ್ನತ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ. ಜಿಲ್ಲಾಧಿಕಾರಿಯಾಗಿ, ಪೊಲೀಸ್ ವರಿಷ್ಠಾಧಿಕಾರಿಯಾಗಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆಗಿ ಇಷ್ಟೇ ಏಕೆ ನ್ಯಾಯ ನೀಡುವ ನ್ಯಾಯಾಧೀಶರ ಸ್ಥಾನದಲ್ಲಿಯೂ ಮಹಿಳೆ ಇರುವುದು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರಾಗಿ ಹಲವಾರು ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಗಮನಿಸುವುದಾದರೇ ‘ಹೆಣ್ಣು ಮಕ್ಕಳೇ ಸ್ಟ್ರಾಂಗೂ ಗುರು’ ಅನ್ನೋ ಸಾಲುಗಳಿಗೆ ತುಂಬಾನೇ ಖುಷಿ ನೀಡುತ್ತದೆ. ನಿಜಕ್ಕೂ ಮಹಿಳಾ ದಿನಾಚರಣೆಗೆ ಈ ವಿದ್ಯಮಾನ ಜಿಲ್ಲೆಯೇ ಹೆಮ್ಮೆಪಡುವ ವಿಷಯ.
ಹೌದು, ಒಬ್ಬ ಹೆಣ್ಣು ಮಗಳು ನಮ್ಮ ಜೀವನದಲ್ಲಿ ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ ಅಷ್ಟೇ ಏಕೆ ಮಗಳಾಗಿ, ಮನೆಗೆಲಸದವಳಾಗಿಯೂ ಎಲ್ಲ ಜವಾಬ್ದಾರಿಗಳನ್ನು ಹೆಚ್ಚಾಗಿ ನಿರ್ವಹಿಸುವಂತಹಳಾಗಿದ್ದಾಳೆ.
ಒಂದು ಕಂಪನಿ ನಡೆಸುವ ಎಂಡಿಗೆ ಇರುವ ಜವಾಬ್ದಾರಿ, ಒಂದು ಮನೆ ನಡೆಸುವ ಮಹಿಳೆಗೆ ತನ್ನ ಕುಟುಂಬ ನಿರ್ವಹಣೆಯಷ್ಟು ಜವಾಬ್ದಾರಿ ಹೊತ್ತಿರುತ್ತಾಳೆ. ಮನೆಯಲ್ಲಿರುವ ಪ್ರತಿಯೊಬ್ಬ ಹೆಣ್ಣು ಮಗಳು ಸಹ ಸಾಧಕಿಯರೇ. ಮನೆ ಮಂದಿಗೆಲ್ಲ ಇವರು ಸಾಧನೆಗೆ ಸ್ಫೂರ್ತಿದಾಯಕ ಆಗಿರುತ್ತಾರೆ.
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಾರ್ಚ್08 ರಂದು ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ವಿಶ್ವವ್ಯಾಪ್ತಿ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಪರಿಚಯಗೊಳಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಅದೇಷ್ಟೋ ಮಹಿಳೆಯರು ಸರ್ಕಾರಿ, ಖಾಸಗಿ ಕಚೇರಿ ಮತ್ತು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ರಜೆ ದಿನದಂದು ಕಚೇರಿಗೆ ಮಾತ್ರಯಿದ್ದು, ಮನೆಯಲ್ಲಿ ನಿರಂತರವಾಗಿ ಕುಟುಂಬ ನಿರ್ವಹಣೆಯ ಕಾರ್ಯ ಮಾಡುತ್ತಿದ್ದಾರೆ. ಗಾಣದ ಎತ್ತುಗಳ ರೀತಿ ದುಡಿಯುತ್ತಿರುತ್ತಾರೆ.
ಗೃಹಿಣಿ ಎಂದಾಕ್ಷಣ ಮೂಗು ಮುರಿಯುವರ ಸಂಖ್ಯೆಯೇ ಹೆಚ್ಚು. ಆಕೆಗೂ ಸಾಧನೆಯ ಹಂಬಲವಿದೆ. ಜ್ಞಾನದ ಒಡಲಿದೆ ಎಂಬುದನ್ನು ಅರಿಯುವುದಿಲ್ಲ. ಗೃಹಿಣಿ ಎಂಬುದು ಕೇವಲ ಮೂರೇ ಅಕ್ಷರ. ಅದರಲ್ಲಿ ಸುಖ, ಸಂತೋಷ, ನೆಮ್ಮದಿ, ತಾಳ್ಮೆಯ ತೆಕ್ಕೆಯಿದೆ. ಸಮಾಜದಲ್ಲಿ ಮಹಿಳೆಯರ ಸಮಾನತೆ, ಸ್ವಾತಂತ್ರ್ಯಕ್ಕೆ ಸಾಕಷ್ಟು ಹಕ್ಕುಗಳಿದ್ದು, ಅವುಗಳನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.
-ಮೈನಾ
ಅಪ್ರೆಂಟಿಸ್ ತರಬೇತಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಚಿತ್ರದುರ್ಗ
[t4b-ticker]
+ There are no comments
Add yours