ನವದೆಹಲಿ, ಡಿ. 01: ಪತ್ರಕರ್ತೆ ನೀಲಾಂಜನಾ ಭೌಮಿಕ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ (ಎಚ್ಸಿ) ರದ್ದುಗೊಳಿಸಿದೆ. ಪ್ರಕಟಿಸಿದ ವರದಿ ವಾಸ್ತವಿಕವಾಗಿ ಸರಿಯಾಗಿದ್ದರೆ ಮತ್ತು ಖ್ಯಾತಿಗೆ ಯಾವುದೇ ಹಾನಿಯನ್ನುಂಟು ಮಾಡದಿದ್ದರೆ ಪತ್ರಕರ್ತೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದಿಲ್ಲ. ನಿಖರವಾದ ವರದಿ ಮಾಡುವುದು ಅಪರಾಧವಲ್ಲ ಎಂದು ತೀರ್ಪು ನೀಡಿದೆ.
ಆಧಾರವಾಗಿರುವ ಸಂಗತಿಗಳು ಸರಿಯಾಗಿದ್ದಾಗ ಪತ್ರಿಕೋದ್ಯಮ ಶೈಲಿ, ಸ್ವರ ಅಥವಾ ನಿರೂಪಣೆಯು ಮಾನನಷ್ಟಕ್ಕೆ ಕಾರಣವಾಗುವುದಿಲ್ಲ ಎಂದು ಪೀಠವು ಒತ್ತಿಹೇಳಿತು.





