ಖಾತರಿ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ.

 

 

 

 

ಖಾತರಿ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಚಿತ್ರದುರ್ಗ,ಮಾರ್ಚ್09;
  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, ಜಿಲ್ಲೆಯ 6 ತಾಲೂಕುಗಳಲ್ಲಿ 6 ಜನ ತಾಂತ್ರಿಕ ಸಹಾಯಕರನ್ನು(ತೋಟಗಾರಿಕೆ ಮತ್ತು ಅರಣ್ಯ)ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಹತೆಗಳು:  ಅರ್ಜಿಯನ್ನು ಸಲ್ಲಿಸಲು ವಯೋಮಿತಿ 21 ರಿಂದ 40 ಉಳ್ಳವರಾಗಿರಬೇಕು. ಬಿ.ಎಸ್ಸಿ (ಅರಣ್ಯ), ಎಂ.ಎಸ್ಸಿ(ಅರಣ್ಯ), ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಹಾಗೂ ಬಿ.ಎಸ್ಸಿ(ಅಗ್ರಿ), ಬಿ.ಎಸ್ಸಿ(ತೋಟಗಾರಿಕೆ), ಎಂ.ಎಸ್ಸಿ(ಅಗ್ರಿ), ಎಂ.ಎಸ್ಸಿ (ತೋಟಗಾರಿಕೆ) ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ 08194-229910/08194-223058  ಸಂಪರ್ಕಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours