ಕೈ ನಡು ಗ್ರಾಮದ ಬಳಿ ಟ್ಯಾಂಕರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲೆ ಸಾವು
ಟ್ಯಾಂಕರ್ ಗೆ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಸಾವನ್ನಪ್ಪಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಕೈನಡು ಗ್ರಾಮದ ಬಳಿ ತಡರಾತ್ರಿ ನಡೆದಿದೆ…
ಇನ್ನೂ ಮೃತಪಟ್ಟ ಬೈಕ್ ಸವಾರರನ್ನು ಕೈನಡು ಗ್ರಾಮದ ಉಜ್ಜಿರಪ್ಪ ರವಿಕುಮಾರ್, ಆಚಾರ್ ಗಿರೀಶ್ ಎಂದು ಗುರುತಿಸಲಾಗಿದೆ…
ಇನ್ನೂ ಇವರೆಲ್ಲರೂ ಒಂದೇ ಬೈಕಿನಲ್ಲಿ ಹೊಸದುರ್ಗ ದಿಂದ ಕೈನಡು ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಶ್ರೀರಾಂಪುರ ಕಡೆಯಿಂದ ದುರ್ಗದ ಕಡೆಹೋಗುತ್ತಿದ್ದ ಟ್ಯಾಂಕರ್ ಲಾರಿ ಚಾಲಕ ಬೈಕ್ ಡಿಕ್ಕಿಯಾಗಿ ಸವಾರರ ಮೇಲೆ ಹತ್ತಿಸಿಕೊಂಡು ಲಾರಿ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ ….ಆದರೆ ಲಾರಿಯನ್ನು ಸೋಮಸಂದ್ರ ಗ್ರಾಮದ ಬಳಿ ಲಾರಿ ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ….ಇನ್ನೂ ಈ ಘಟನೆ ಶ್ರೀ ರಾಂಪುರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ….
[t4b-ticker]
+ There are no comments
Add yours