ಮೊಳಕಾಲ್ಮುರು ಕ್ಷೇತ್ರದಿಂದ ಶ್ರೀರಾಮುಲು ಔಟ್, ತವರಿನ ಎರಡು ಕ್ಷೇತ್ರದ ಕಡೆ ರಾಮುಲು ಕಣ್ಣು ?

 

ಬಳ್ಳಾರಿ:ballarey ಮುಂದಿನ ಚುನಾವಣೆಗೆ ಬಳ್ಳಾರಿಯತ್ತ ಮುಖ ಮಾಡಿರುವ ಶ್ರೀರಾಮುಲು ಈ ಬಾರಿ ಸಂಡೂರು ಅಥವಾ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಬಹಿರಂಗಪಡಿಸಿದ್ದಾರೆ.( molakalmuru)

ರಾಮುಲು ಸ್ವಂತ ಜಿಲ್ಲೆಯಿಂದ ಸ್ಪರ್ಧೆ ಮಾಡುವ ನಿರ್ಧಾರದ ಹಿಂದೆ ಹತ್ತು ಹಲವು ಲೆಕ್ಕಾಚಾರಗಳು ಇದ್ದು ಮೊಳಕಾಲ್ಮೂರಿನಲ್ಲಿ ಸೋಲುವ ಭಯಕ್ಕೆ ತವರು‌ ಜಿಲ್ಲೆಗೆ ರಾಮುಲು ಮರಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. sriramulu

ಅಷ್ಟೇ ಅಲ್ಲದೇ ಬಳ್ಳಾರಿ ಉಸ್ತುವಾರಿ ಪಡೆಯೋಕೂ ರಾಮುಲು ಸರ್ಕಸ್ ಮಾಡಿದ್ದರು. ಶ್ರೀರಾಮುಲು ಹೊರ ಜಿಲ್ಲೆಯಿಂದ ಸ್ಪರ್ಧೆ ಮಾಡಿದ್ದರಿಂದ ಕಂಪ್ಲಿ, ಬಳ್ಳಾರಿ ಗ್ರಾಮೀಣ ಸೇರಿದಂತೆ ಅನೇಕ ಬಿಜೆಪಿ ಅಭ್ಯರ್ಥಿಗಳ ಸೊಲಾಗಿತ್ತು. ಹೀಗಾಗಿ ರಾಮುಲು ಬೆನ್ನಿಗೆ ನಿಲ್ಲುವ ಶಾಸಕರ ಸಂಖ್ಯೆ ಕಡಿಮೆ‌ ಆಗಿತ್ತು. ಈಗ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಈ ಬಾರಿ ಹಿನ್ನಡೆಯಾಗದಂತೆ ಹಾಗೂ ಬಳ್ಳಾರಿ ವಿಜಯನಗರ ರಾಯಚೂರು ಜಿಲ್ಲೆಗಳ ಮೇಲೆ ಪೋಕಸ್ ಮಾಡಲು ರಾಮುಲು ಪ್ಲಾನ್ ಮಾಡಿದ್ದಾರೆ.molakalmuru

ಈ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆ  ಸಂಡೂರು ಅಥವಾ ಹಳೆ ಕ್ಷೇತ್ರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೇಲೆ ಶ್ರೀರಾಮುಲು ಕಣ್ಣಿ್ಟ್ಟಿದ್ದು  ಸಂಡೂರಿನಿಂದ ಸ್ವರ್ಧೆ ಗೆ ಹೆಚ್ಚು ಒಲವು ತೋರಿದ್ದಾರೆ ಎಂಬ ಮಾತು ಅಪ್ತ ವಲಯದಲ್ಲಿ  ಕೇಳಿ ಬರುತ್ತಿದೆ. ಸದ್ಯ ಅವರು ಸಹ ಮೊಳಕಾಲ್ಮುರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಇಲ್ಲ ಎಂದು ಸ್ವತಃ ರಾಮುಲು ದೃಢಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours