ಮೇ 2 ರಂದು ಕೋಟೆ ನಾಡಿಗೆ ಪ್ರಧಾನಿ ಮೋದಿ ಆಗಮನ

 

ಚಳ್ಳಕೆರೆ-25 ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ಮೇ2ರಂದು ಪ್ರಧಾನಿ‌ಮೋದಿ ಚಿತ್ರದುರ್ಗ ಆಗಮಿಸುವರು ಎಂದು
ಗುಜರಾತ್ ನ ಮುಖ್ಯ ಸಚೇತಕರಾದ ಕೌಶಿಕ್ ಬಾಯ್ ತಿಳಿಸಿದರು.

ಅವರು, ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಳ್ಳಕೆರೆ, ಮೊಳಕಾಲ್ಮೂರು, ಜಗಲೂರು ವ್ಯಾಪ್ತಿಯಲ್ಲಿ ಚಿತ್ರನಟ ಸುದೀಪ್‌ ಆಗಮಿಸಿ‌ ಅಭ್ಯರ್ಥಿಗಳ ಪರ‌ ಪ್ರಚಾರ ಮಾಡುವರು ಪ್ರಚಾರ ಮಾಡುವರು ಬುಧವಾರ ಮೊಳಕಾಲ್ಮೂರು, ಜಗಲೂರು ವ್ಯಾಪ್ತಿಯಲ್ಲಿ ಪ್ರಚಾರ ಮಾಡುವರು ಚಳ್ಳಕೆರೆ ನಗರಕ್ಕೆ ಎರಡ್ಮೂರು ದಿನಗಳ‌ ನಂತರ ಆಗಮಿಸುವರು ಎಂದರು.
ಈ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಮಾಜಿ ರಾಜ್ಯ ಅಧ್ಯಕ್ಷ ಜಿತು ಬಾಯ್, ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಚಳ್ಳಕೆರೆ ಪ್ರಭಾರಿಗಳಾದ ಟಿ. ಜೆ.ನರೇಂದ್ರನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲಯ್ಯ, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮಾಜಿ ಮಂಡಲದ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ವಿಸ್ತಾರಕ ರಾಜಣ್ಣ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours