ಈ ಬಾರಿ ನನಗೆ ಆಶೀರ್ವಾದ ಮಾಡಿ ಎಂದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ

 

ಚಳ್ಳಕೆರೆ-20 ಕಳೆದ ಚುನಾವಣೆಯಲ್ಲಿ‌ ನನ್ನ ಪೂಜ್ಯ ತಂದೆ ದಿವಂಗತ ತಿಪ್ಪೇಸ್ವಾಮಿಯವರು ಕ್ಷೇತ್ರದಲ್ಲಿ ಹಲವಾರು ಜನರ‌ಪರ ಕಾರ್ಯಕ್ರಮ ಮಾಡಿದ್ದಾರೆ. ಅವರ ಪುತ್ರನಾಗಿ ನಾನು‌ ಅವರ ದಾರಿಯಲ್ಲೇ ನಡೆಯುವೆ. ಕಳೆದ ಎರಡು ಚುನಾವಣೆಯಲ್ಲಿ‌ ನನ್ನನ್ನು ಸೋಲಿಸಿದ್ದೀರ ಈ ಭಾರಿ ಈ ಕ್ಷೇತ್ರದಲ್ಲಿ ಬಹುಮತಗಳಿಂದ ಗೆಲ್ಲಿಸಲು ಎಲ್ಲರೂ ಮತಬಿಕ್ಷೆ ಹಾಕಿ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಕೈ ಒಡ್ಡಿ ಬೇಡಿದರು.

ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ನನ್ನನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಸಾವಿರಾರು ಜನರು ಬಂದು ನಾಮಪತ್ರ ಸಲ್ಲಿಸಲು ಸಾಕ್ಷಿಯಾಗಿದ್ದೀರ. ನಿಮ್ಮ ಈ ಬೆಂಬಲ‌ ನನಗೆ ಶ್ರೀರಕ್ಷೆಯಾಗಿ ಗೆಲುವು ಸಾಧಿಸಲು ಸಹಕಾರಿಯಾಗಲಿದೆ. ಜನರ ಕಲ್ಯಾಣವೆ‌ ನಾನು ಮಾಡುವ ಮೊದಲ‌ ಕೆಲಸವಾಗಿದೆ. ದಯಮಾಡಿ‌ ನನ್ನ ಈ ಬಾರಿ ಶಾಸಕನಾಗಿ‌ ಆಯ್ಕೆ ಮಾಡಿ. ನಮ್ಮ‌ ತಂದೆ ಮಾಜಿ ಶಾಸಕ‌ ತಿಪ್ಪೇಸ್ವಾಮಿಯವರು ಕ್ಷೇತ್ರದ ಜನರಿಗಾಗಿ ಹಲವಾರು ಯೋಜನೆಗಳನ್ನು‌ ಜಾರಿಗೆ ತಂದು ಬರಪೀಡಿತ ತಾಲ್ಲೂಕಿನ ಅಭಿವೃದ್ಧಿಗೆ ಪಣತೊಟ್ಟಿದ್ದರು. ಅದರಂತೆ ನಾನು ದುಡಿಯುವೆ ಎಂದರು.

ತನ್ನ ತಾಯಿ ಸುಮಿತ್ರಮ್ಮನೊಂದಿಗೆ ಆಗಮಿಸಿದ ಕೆ.ಟಿ.ಕುಮಾರಸ್ವಾಮಿ ತಾಯಿ ಆಶೀವಾದ ಪಡೆದು ನಾಮಪತ್ರ ಸಲ್ಲಿಸಿದರು. ಕೆ.ಟಿ.ನಿಜಲಿಂಗಪ್ಪ, ಶಿವಪುತ್ರಪ್ಪ, ಉಮೇಶ್, ಮಧು, ತಿಪ್ಪೇಸ್ವಾಮಿ ಮೊದಲಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours