ಅಳದಂಗಡಿ: ಕಸ್ತೂರಿ ರಂಗನ್ ವರದಿಯ ಅನ್ವಯ ಕೇಂದ್ರ ಸರ್ಕಾರವು ದಿನಾಂಕ 27.07.2026 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿರುತ್ತಾರೆ . ಈ ಅಧಿಸೂಚನೆಯಲ್ಲಿ ಹಲವು ಗ್ರಾಮ ಒಳಗೊಂಡಿರುವುದರಿಂದ ಇದನ್ನು ವಿರೋಧಿಸಲು ಅಳದಂಗಡಿ ಹಿತರಕ್ಷಣಾ ವೇದಿಕೆಯ ಸಭೆ ಆ. 8ರಂದು ನಡೆಯಿತು.


ಅಳದಂಗಡಿ ಶ್ರೀ ಸೋಮನಾಥೆಶ್ವರಿ ಭಜನಾ ಮಂದಿರದ ವಠಾರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು
ವಹಿಸಿ ಅಧಿಸೂಚನೆಗೆ ಗ್ರಾಮಸ್ಥರು ಮಾಡಬೇಕಾದ ಅಗತ್ಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಮುಖರಾದ ಎಂ. ಗಂಗಾಧರ್ ಮಿತ್ತಮಾರು, ಸೋಮನಾಥ ಬಂಗೇರ, ಸದಾನಂದ ಪೂಜಾರಿ ಉಂಗಿಲ ಬೈಲ್, ಸುಧೀರ್ ಆರ್ ಸುವರ್ಣ, ನಾವರ, ಸುಲ್ಕೆರಿ ಮೊಗ್ರು, ಸುಲ್ಕೆರಿ, ಶಿರ್ಲಾಲ್, ಕರಂಬಾರ್, ಬಳoಜ, ನಾಲ್ಕೂರ್ ಗ್ರಾಮಗಳ ಹಲವು ಪ್ರಮುಖರು ಭಾಗವಹಿಸಿದ್ದರು.
ಮಾಧವ ಕುಲಾಲ್ ಕಸ್ತೂರಿ ರಂಗನ್ ವರದಿಯಲ್ಲಿ ಏನು ಇದೆ ಹಿಂದೆಯೂ ಹೋರಾಟ ಮಾಡಿದೆ ಮುಂದೆಯೂ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಈ ಅಧಿಸೂಚನೆಗೆ ಸ್ಥಳೀಯ ಜನರಿಗೆ ಮತ್ತು ಗ್ರಾಮಸ್ಥರಿಗೆ ತಮ್ಮ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಯುಕ್ತ ಸದರಿ ಸೂಚನೆಯ ಬಗ್ಗೆ ಆಕ್ಷೇಪಣೆ ಸಲ್ಲಿಸುವವರಿಗಾಗಿ ಆಯಾ ಗ್ರಾಮದ ಪ್ರಮುಖರು ಸಹಕರಿಸಬೇಕು ಮುಂದಿನ ಹೋರಾಟಕ್ಕೆ ನಾವೆಲ್ಲಾ ರೆಡಿ ಎಂದು ಗ್ರಾಮಸ್ಥರು ತಮ್ಮ ತಮ್ಮ ಬೆಂಬಲ ತಿಳಿಸಿದರು
ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.



