ಪಡಂಗಡಿ: ಇಲ್ಲಿಯ ಅಡಿಕೆ ತೋಟವೊಂದಕ್ಕೆ ಟ್ಯಾಂಕರ್ನಲ್ಲಿ ಕಳುಷಿತ ನೀರು ಸುರಿಯುತ್ತಿದ್ದ ವಿಚಾರ ಗ್ರಾಮಸ್ಥರಿಗೆ ಗೊತ್ತಾಗಿ ಟ್ಯಾಂಕರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ವಿದ್ಯಾಮಾನ ನಡೆದಿದೆ.

ಟ್ಯಾಂಕರಿನ ಕಳುಷಿತ ನೀರನ್ನು ಗುರುವಾಯನಕೆರೆಯಿಂದ ತರಲಾಗಿದೆ ಎನ್ನಲಾಗಿದ್ದು, ಪಡಂಗಡಿಯ ಫಲಬರುವ ಅಡಿಕೆ ತೋಟಗಳ ಬುಡಕ್ಕೆ ಕಳುಷಿತ ನೀರು ಬಿಡುತ್ತಿದ್ದ ವೇಳೆ ವಿಚಾರ ಗೊತ್ತಾಗಿ ಇಲ್ಲಿಯ ಮುಖಂಡ ಸಂತೋಷ್ ಕುಮಾರ್ ಜೈನ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಟ್ಯಾಂಕರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.






