ವಿಧಾನ ಸಭೆ ಅಧಿವೇಶನ: ಉಪ ವಿಭಾಗಧಿಕಾರಿ ವಿ.ಪ್ರಸನ್ನ ಸಾವಿನ ತನಿಖೆ ವಿಳಂಬ ಕುರಿತು ಶಾಸಕ ಟಿ.ರಘುಮೂರ್ತಿ ಪ್ರಸ್ತಾಪ

 

ಬೆಂಗಳೂರು:   ಇಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು  ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆಯ ಅತ್ಯಂತ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ಚಿತ್ರದುರ್ಗ ಉಪ ವಿಭಾಗಾಧಿಕಾರಿ ವಿ.ಪ್ರಸನ್ನ ರವರ ಅನುಮಾನಸ್ಪದ ಸಾವಿನ ತನಿಖಾ ವಿಳಂಬದ ಕುರಿತು ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿದ ಗೃಹ ಸಚಿವರು ಈ ಪ್ರಕರಣದ ಪತ್ತೆಗಾಗಿ ಚಿತ್ರದುರ್ಗ ಡಿ ವೈ ಎಸ್ ಪಿ ನೇತ್ರತ್ವದಲ್ಲಿ ಸುಮಾರು 5 ತಂಡಗಳ ರಚನೆ ಮಾಡಿ ತನಿಖೆ ನಡೆಸಿದರೂ ಸಹ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ತನಿಖೆ ವಿಳಂಭವಾಗುತ್ತಿದೆ. ಖಂಡಿತವಾಗಿಯೂ ಈ ಪ್ರಕರಣವನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.

ಪ್ರಕರಣದ ತನಿಖೆ ವಿಳಂಬಕ್ಕೆ ಪೊಲೀಸರ ನಿರ್ಲಕ್ಷವೇ ನೇರಹೊಣೆಯಾಗಿದ್ದು, ಆದಷ್ಟು ಶೀಘ್ರವೇ ಪ್ರಕರಣವನ್ನು ಪತ್ತೆ ಹಚ್ಚುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದೆ.

[t4b-ticker]

You May Also Like

More From Author

+ There are no comments

Add yours