ವರದಿ: ಚಿಕ್ಕಪ್ಪನಹಳ್ಳಿ ಸೋಮು
ಹೊಸದುರ್ಗ : ತಾಲ್ಲೂಕಿನ ಶ್ರೀರಾಂಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಚಿತ್ರದುರ್ಗ ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನೋಂದಾಯಿತ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ಗಿರಿ ತಿಮ್ಮಕ್ಕ, ಗ್ರಾಮಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ, ಸಮೃದ್ಧಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ರಾಜ್ಯದ್ಯಕ್ಷ ಎನ್.ರಮೇಶ್,
ಸಂಘದ ಸಮೃದ್ಧಿ ಕಟ್ಟಡ ಕಾರ್ಮಿಕರ ತಾಲ್ಲೂಕು ಅಧ್ಯಕ್ಷ ಹೆಚ್.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆಸ್ವಾಮಿ, ನಿರ್ದೇಶಕ ಮಹಮದ್ ಮನ್ಸೂರ್, ಯೋಗೇಶ್ ಮೂರ್ತಿ, ಪಾಂಡುರಂಗಪ್ಪ, ಸಿದ್ದೇಶ್ ಕುಮಾರ್, ನಾಗ್ ಅಮೃತ್, ಧನುಂಜಯ್, ಮರುಳಸಿದ್ದಪ್ಪ ಇದ್ದರು.
+ There are no comments
Add yours