ಚಿತ್ರದುರ್ಗ:ಗ್ರಾಮೀಣ ಭಾಗದ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಪಕ್ಷಾತೀತವಾಗಿ ಸಹಕಾರ ನೀಡಲು ಸದಾ ಸಿದ್ದ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೀಬಾರ ಮತ್ತು ಗುಳಯ್ಯನಹಟ್ಟಿಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಾಂಮ್ಸಿ (PRAMC) ಲೆಕ್ಕ ಶೀರ್ಷಿಕೆಯಡಿ ನಿರ್ಮಿಸುತ್ತಿರುವ ರಸ್ತೆ
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸುಮಾರು 2 ಕೋಟೆ ವೆಚ್ಚದಲ್ಲಿ 2 ಕಿಲೋ ಮೀಟರ್ ರಸ್ತೆಯನ್ನು ಮಾಡಲಾಗುತ್ತಿದೆ.
ಗ್ರಾಮೀಣ ಭಾಗದ ರಸ್ತೆ, ಶಾಲೆಗಳ ಅಭಿವೃದ್ಧಿ, ಶುದ್ದ ಕುಡಿಯುವ ನೀರು, ಚಕ್ ಡ್ಯಾಂ ಗಳಿಗೆ ಒತ್ತು ನೀಡಲಾಗುತ್ತಿದ್ದು ಸಮಗ್ರ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಗ್ರಾಮ ಪಂಚಾಯತಿಯಲ್ಲಿ ಗೆಲುವು ಸಾಧಿಸಿದ ನಂತರ ಎಲ್ಲಾರೂ ಸಹ ಪಕ್ಷಾತೀತವಾಗಿ ಅಭಿವೃದ್ಧಿ ಮಾಡಬೇಕು ಎಂದರು. ನನಗೆ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಒಂದೇ ಯಾರು ಸಹ ಅಭಿವೃದ್ಧಿ ವಿಚಾರದಲ್ಲಿ ಹಿಂದೇಟು ಹಾಕಬಾರದು. ಊರಿನಲ್ಲಿ ನೀರು , ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡಿದರೆ ಜನರು ಸಂತೋಷದಿಂದ ಇರುತ್ತಾರೆ ಎಂದರು.
ಇನ್ನು ಹಲವು ಕಡೆಗಳಲ್ಲಿ ದೇವಸ್ಥಾನಗಳಿಗೆ ಮತ್ತು ಸಮುದಾಯ ಭವನಗಳಿಗೆ ಹಣ ನೀಡಿದ್ದೇನೆ ಕೆಲಸ ಆರಂಭಿಸಬೇಕಿದೆ. ಒಟ್ಟಿನಲ್ಲಿ ಎಲ್ಲಾರೂ ಸೇರಿ ಅಭಿವೃದ್ಧಿ ಕಡೆಗೆ ಗಮನ ಹರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿನಾಡು ಗ್ರಾಮದ ಕಲ್ಲೇಶಯ್ಯ, ಚಿದಾನಂದ,ಜಂಬಣ್ಣ, ಮಾಜಿ ತಾ.ಪಂ ಸದಸ್ಯ ರಾದ ಪರಮೇಶ್, ಎಂ.ಕೆ ಹಟ್ಟಿ ನಿಂಗಪ್ಪ, ಗ್ರಾ.ಪಂ ಸದಸ್ಯರಾದ ರಾಮಣ್ಣ, ಬೈಯಣ್ಣ, ಸೀಬಾರ ಮುತ್ತಣ್ಣ,ಮೂರ್ತಪ್ಪ, ಕಲ್ಲಣ್ಣ, ರಾಮು, ಗೀತಮ್ಮ, ನೇತ್ರಮ್ಮ, ಗುತ್ತಿಗೆದಾರ ಬಲರಾಂರೆಡ್ಡಿ ಇಂಜಿನಿಯರ್ ಚಂದ್ರಹಾಸ್ ಸೇತಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು……
[t4b-ticker]
+ There are no comments
Add yours